10
ಮಂಜೇಶ್ವರ: ಹಲ್ಲೆ ಪ್ರಕರಣ ಸಂಬಂಧ ಆರೋಪಿಯೋರ್ವನನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಮಚ್ಚಂಪಾಡಿಯ ಅಬ್ದುಲ್ ಜಬ್ಬಾರ್ (37) ಎಂದು ತಿಳಿದು ಬಂದಿದೆ.
ಪಾವೂರು ಕೋಡಿ ಮನೆಯ ಅಬ್ದುಲ್ ಖಾದರ್ (35) ಮತ್ತು ಮಹಮ್ಮದ್ ಜಾಫರ್ (31) ರವರ ಮೇಲೆ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಈತನನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಈತನಲ್ಲದೆ ಹೊಸಂಗಡಿ ಯಾಕೂಬ್, ಮುಬಾರಕ್ ಮತ್ತು ಅಶ್ರಫ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮಚ್ಚಂಪಾಡಿಯಲ್ಲಿ ಕಾರಿಗೆ ಸೈಡ್ ಕೊಡುವ ವಿಚಾರದಲ್ಲಿ ಹಲ್ಲೆ ನಡೆದಿದೆ ಎಂದು ತಿಳಿದು ಬಂದಿದೆ.