16
ಕೋಲ್ಕತಾ: ಎಕ್ಸ್ಪ್ರೆಸ್ ರೈಲು ಡಿಕ್ಕಿಯಾಗಿ 2 ಮರಿಗಳು ಸಹಿತ 3 ಆನೆಗಳು ಮೃತಪಟ್ಟ ಘಟನೆ ಪಶ್ಚಿಮ ಬಂಗಾಳದ ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಬನ್ಸ್ತಾಲಾ ರೈಲು ನಿಲ್ದಾಣದ ಬಳಿ ವರದಿಯಾಗಿದೆ.
ಗುರುವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಜಾರ್ಖಂಡ್ ದಾಲ್ಮಾ ಅರಣ್ಯದಿಂದ ಬಂದಿದ್ದ ಆನೆಗಳ ಹಿಂಡು ರೈಲು ಹಳಿ ದಾಟುತ್ತಿದ್ದಾಗ ಈ ಅವಘಡ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ.
ಖರಗ್ಪುರ-ಟಾಟಾನಗರ ಮಾರ್ಗದ ವೇಗವಾಗಿ ಬಂದ ಜನಶತಾಬಿ ಎಕ್ಸ್ಪ್ರೆಸ್ ರೈಲು ಆನೆಗಳಿಗೆ ಡಿಕ್ಕಿ ಹೊಡೆದಿದೆ ಎಂದು ಅವರು ತಿಳಿಸಿದ್ದಾರೆ.