ಹರಪನಹಳ್ಳಿ: ತಾಲೂಕಿನ ದುಗ್ಗಾವತಿ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ತಂದೆ, ಮಗ ಮೃತಪಟ್ಟ ಘಟನೆ ನಡೆದಿದೆ.
ಮೃತರು ಗ್ರಾಮದ ಹಲಗಿ ರಮೇಶ (38), ಹಾಗೂ ಅವರ ಮಗ ಹಲಗಿ ಚಂದ್ರು (15) ಎಂದು ತಿಳಿದು ಬಂದಿದೆ.
ದುಗ್ಗಾವತಿಯ ಶಾಮನೂರು ಶುಗರ್ ಕಾರ್ಖಾನೆಯ ಪಕ್ಕದ ಅಡಿಕೆ ಜಮೀನಿನಲ್ಲಿ ಕುರಿ ಮೇಯಿಸುತ್ತಿದ್ದ ವೇಳೆ
ಜಮೀನಿನಲ್ಲಿ ಸುತ್ತಿದ್ದ ತಂತಿ ಮೇಲೆ ಜೆಸ್ಕಾಂ ಲೈನ್ ಸಂಪರ್ಕ ಲೈನ್ ಬಿದ್ದಿದ್ದರಿಂದ ವಿದ್ಯುತ್ ಪ್ರವಹಿಸಿದೆ. ಅಲ್ಲದೇ ಮಳೆಯಾಗಿದ್ದರಿಂದ ಸುತ್ತಲಿನ ಪ್ರದೇಶಕ್ಕೂ ವಿದ್ಯುತ್ ಆವರಿಸಿದೆ. ಈ ಕುರಿತು ಅರಿವಿಲ್ಲದೇ ವಿದ್ಯುತ್ ಕಂಬದ ಬಳಿ ತೆರಳಿದ್ದ ತಂದೆ-ಮಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ಬಳಿಕ ಸ್ಥಳಕ್ಕೆ ದಾವಿಸಿದ ಜೆಸ್ಕಾಂ ಸಿಬ್ಬಂದಿ, ವಿದ್ಯುತ್ ತಂತಿಯನ್ನು ಸರಿಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಹಲವಾಗಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.