ಸುರತ್ಕಲ್: ಇಡ್ಯಾ ಖಿಲ್ ರಿಯಾ ಮಸೀದಿ ಮತ್ತು ಮದ್ರಸ (ರಿ)ಇದರ ವತಿಯಿಂದ ನಡೆಯುವ 64ನೇ ಇಡ್ಯಾ ಖಿಲ್ರ್ ಮೌಲೂದ್ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಎ23ರಿಂದ 26ರ ವರೆಗೆ ಮಸೀದಿಯ ವಠಾರದಲ್ಲಿ ನಡೆಯಲಿದೆ.
ಏ. 24, 25ರಂದು ಇಸ್ಲಾಮಿಕ್ ಕಥಾ ಪ್ರಸಂಗ ಖೈಬರ್ ಚರಿತ್ರೆ ಕಾರ್ಯಕ್ರಮ ಮಡೆಯಲಿದೆ. ಏ.26ರಂದು ಶನಿವಾರ ಸಮಾರೋಪ ಸಮಾರಂಭ ನಡೆಯಲಿದ್ದು, ಮುಹಮ್ಮದ್ ಅಝ್ಹರ್ ಫೈಝಿ ಬೊಳ್ಳೂರು ಉಸ್ತಾದ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಸಯ್ಯದ್ ನಜ್ಜುದ್ದೀನ್ ಪೂಕೋಯ ತಂಬಳ್ ಅಲ್ ಹೈದ್ರೋಸಿ ಕೇರಳ ಇವರು ದುವಾ ಆಶೀರ್ವಚನ ನೀಡಲಿದ್ದಾರೆ.
ಅಲ್ಲದೆ, ಸಮಾರೋಪ ಸಮಾರಂಭದಲ್ಲಿ ಸ್ಥಳೀಯ ನೇತಾರರು, ವಿವಿಧ ಪಕ್ಷಗಳ ನಾಯಕರು, ಉಲಮಾ-ಉಮರಾಗಳು ಭಾಗವಹಿಸಲಿದ್ದಾರೆ ಎಂದು ಸುರತ್ಕಲ್ ಇಡ್ಯಾ ಖಿಲ್ರಿಯಾ ಮಸೀದಿ ಮತ್ತು ಮದ್ರಸ (ರಿ)ನ ಪ್ರಕಟಣೆ ತಿಳಿಸಿದೆ.